Kalegala Sangada Matukate

ಕಲೆಗಳ ಸಂಗಡ ಮಾತುಕತೆ

ನೀನಾಸಮ್
ಕಲೆಗಳ ಸಂಗಡ ಮಾತುಕತೆ (ಅಕ್ಟೋಬರ್ ೨೦೨೬)

ಕಳೆದ ಕೆಲವು ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈಗ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.

೨೦೨೬ ಅಕ್ಟೋಬರ್ ೧ರಿಂದ ೫ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ. ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.

ಈ ಮಾತುಕತೆಗೆ ಕರ್ನಾಟಕ ಮತ್ತು ಹೊರಗಿನ ಬೇರೆಬೇರೆ ರಾಜ್ಯಗಳ ಕಲಾಕಾರರು, ವಿದ್ವಾಂಸರು, ಲೇಖಕರು ಪ್ರದರ್ಶನಕಾರರಾಗಿಯೂ ಉಪನ್ಯಾಸಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ಹಾಗೆ ಬರುವವರು ಐದೂ ದಿನ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ, ಭಾಗಶಃ ಪಾಲ್ಗೊಳ್ಳಲು ಅವಕಾಶ ಇಲ್ಲ. ನೀನಾಸಮ್ ಮತ್ತು ಪಕ್ಕದ ಕಾಲೇಜಿನ ಆವರಣದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೂ ಸರಳವಾದ ಮತ್ತು ಡಾರ್ಮೆಟರಿ ಮಾದರಿಯ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

ನೋಂದಾವಣೆಯ ವಿವರಗಳು:

  • ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು ಈ ಕೆಳಗೆ ಕೊಟ್ಟಿರುವ ಕೊಂಡಿ ಬಳಸಿ ಆನ್-ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು.
  • ಅಂಚೆ ಮೂಲಕ ನೋಂದಾಯಿಸಲು ಬಯಸುವವರು ಕೆಳಗೆ ಲಭ್ಯವಿರುವ ಅಭ್ಯರ್ಥಿಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿ ತಾ. ೫ ಸೆಪ್ಟೆಂಬರ್ ೨೦೨೬ರೊಳಗೆ ನಮಗೆ ತಲುಪುವಂತೆ ಕಳಿಸಬೇಕು.
  • ಆಯ್ಕೆಯಾದವರಿಗೆ ಸೆಪ್ಟೆಂಬರ್ ಎರಡನೆಯ ವಾರ ಈಮೈಲ್ ಅಥವಾ ವಾಟ್ಸ್ಯಾಪ್ ಮೂಲಕ ಶುಲ್ಕ ಪಾವತಿ ಮತ್ತು ವಸತಿ ಮೊದಲಾದ ಹೆಚ್ಚಿನ ವಿವರಗಳನ್ನು ಕೊಡಲಾಗುವುದು.
  • ಅಧ್ಯಯನದ ತರಗತಿಗಳ ಮಾದರಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ. ಸಾಕಷ್ಟು ಕಾರ್ಯಕ್ರಮಗಳು ಇಂಗ್ಲಿಷ್‌ನಲ್ಲೂ ನಡೆಯುವುದರಿಂದ ಆ ಭಾಷೆಯ ಪ್ರಾಥಮಿಕ ತಿಳುವಳಿಕೆ ಅಪೇಕ್ಷಣೀಯ.
  • ಕಾರ್ಯಕ್ರಮದ ಎಲ್ಲ ದಿನಗಳ ಊಟ-ತಿಂಡಿ, ವಸತಿ ಮತ್ತು ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿ ಒಟ್ಟು ಶುಲ್ಕ ರೂ. ೭,೦೦೦ (ರೂಪಾಯಿ ಏಳುಸಾವಿರ) ಜಿಎಸ್‌ಟಿ ಸೇರಿ. ಕಾಲೇಜಿನ ದೃಢೀಕರಣ ಪತ್ರವುಳ್ಳ ವಿದ್ಯಾರ್ಥಿಗಳಿಗೆ ರೂ. ೪,೫೦೦ (ರೂಪಾಯಿ ನಾಲ್ಕು ಸಾವಿರದ ಐದುನೂರು) ಜಿಎಸ್‌ಟಿ ಸೇರಿ.

ಕಾರ್ಯಕ್ರಮಗಳ ತಾತ್ಕಾಲಿಕ ಪಟ್ಟಿ

ಹಗಲಿನ ಕಾರ್ಯಕ್ರಮಗಳ ತಾತ್ಕಾಲಿಕ ಪಟ್ಟಿ (ಅಭ್ಯರ್ಥಿಗಳಿಗೆ ಮಾತ್ರ)

ಆರಂಭಿಕ ಗೋಷ್ಠಿ (ಅರಿಂದಮ್ ಚಕ್ರವರ್ತಿ, ಸುಂದರ್ ಸರುಕ್ಕೈ, ಗೋಪಾಲ ಗುರು); ಪ್ರತಿನಿತ್ಯ ಹಿಂದಿನ ಸಂಜೆ ನೋಡಿದ ನಾಟಕಗಳ ಚರ್ಚೆ; `ಶಕುಂತಲೆಯ ಗುರುತು’ ನಾಟಕ ಪ್ರದರ್ಶನ (ನಿರ್ದೇಶನ  ಅಕ್ಷರ ಕೆ.ವಿ.); ತಯಂಬಕ, ಚಂಡೆ ವಾದನ ಪ್ರಸ್ತುತಿ, ರಹಿತಾ ಕೃಷ್ಣದಾಸ್ ಮತ್ತು ತಂಡ, ಕೇರಳ;ಸಮಕಾಲೀನ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಮಾತುಕತೆ, ವಿವೇಕ ಶಾನಭಾಗ ಮತ್ತು ಗುರುಪ್ರಸಾದ್ ಕಾಗಿನೆಲೆ; ಗೊಂಬೆಯಾಟ ಕುರಿತು, ಅನುರೂಪಾ ರಾಯ್; ನಾಟಕ ಕಂಪೆನಿಗಳ ನಿರ್ವಹಣೆ ಕುರಿತು, ಜ್ಯೋತಿ ಗುಳೇದಗುಡ್ಡ, ಸುಜಾತಾ ಗುಬ್ಬಿ, ಪ್ರಕಾಶ ಗರೂಡ; ಬದಲಾಗುತ್ತ ಬಂದ ಸಿನೆಮಾ ವ್ಯಾಕರಣ, ಗಿರೀಶ ಕಾಸರವಳ್ಳಿ; ಹಾರ್ಮೋನಿಯಂ ಮತ್ತು ಅಕಾರ್ಡಿಯನ್ ವಾದ್ಯಗೋಷ್ಠಿ, ಎಂ.ಬಿ. ಪ್ರಕಾಶ್, ಬೆಣ್ಣೆ ರವಿ, ಕರ್ನಲ್ ಬದ್ರಿ ವಸಂತ್, ಪಂ| ರವೀಂದ್ರ ಕಾಟೋಟಿ; ನನ್ನ ಇಷ್ಟದ ಪುಸ್ತಕ, ಎಂ.ಎಸ್. ಶ್ರೀರಾಮ್, ಗೀತಾ ವಸಂತ, ಶರತ್ ಅನಂತಮೂರ್ತಿ; ಅನುವಾದ ಕುರಿತು, ವನಮಾಲಾ ವಿಶ್ವನಾಥ್, ಸುಂದರ್ ಸರುಕ್ಕೈ; `ಶೂರ್ಪಣಖಾ’, ಏಕವ್ಯಕ್ತಿ ರಂಗಪ್ರಯೋಗ, ಪಾರ್ಶತಿ ಜೆ. ನಾಥ್; ಮತ್ತು ಸಮಾರೋಪ. ಈ ಪ್ರಸ್ತುತಿ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಬೇರೆ ಅತಿಥಿಗಳು: ಟಿ.ಪಿ. ಅಶೋಕ, ಜಸವಂತ ಜಾಧವ್, ಅತುಲ್ ತಿವಾರಿ, ಮಂಜು ಕೊಡಗು, ಮಂಜು ಕಾಸರಗೋಡು, ಮಾಧವ ಚಿಪ್ಪಳಿ, ಬಿ.ಆರ್. ವೆಂಕಟರಮಣ ಐತಾಳ ಮೊದಲಾದವರು.

ಸಂಜೆಯ ಕಾರ್ಯಕ್ರಮಗಳು (೭ ರಿಂದ – ಸಾರ್ವಜನಿಕರಿಗೆ):

೧ ಅಕ್ಟೋಬರ್ – ನೀನಾಸಮ್ ನಾಟಕ: `ಅಂಧಯುಗ’, ನಿರ್ದೇಶನ: ಗಣೇಶ್ ಎಂ.; ೨ ಅಕ್ಟೋಬರ್ – ತಿರುಗಾಟ ನಾಟಕ: `ಪಾದುಕಾ ಕಿರೀಟಿ’, ನಿರ್ದೇಶನ: ಮಂಜು ಕೊಡಗು; ೩ ಅಕ್ಟೋಬರ್ – ತಿರುಗಾಟ ನಾಟಕ: `ಕೊಳ’, ನಿರ್ದೇಶನ: ಮಂಜು ಕಾಸರಗೋಡು; ೪ ಅಕ್ಟೋಬರ್ – ಆಹ್ವಾನಿತ ನಾಟಕ: `ಸೀತಾ ಬನಬಾಸ್’: ಅಂಕ, ಮುಂಬಯಿ; ೫ ಅಕ್ಟೋಬರ್ – ಹಿಂದುಸ್ತಾನಿ ಸಂಗೀತ: ಪಂ. ಸಿದ್ಧಾರ್ಥ ಬೆಳ್ಮಣ್ಣು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ (ಬೆಳಿಗ್ಗೆ 10ರಿಂದ ಸಂಜೆ 6)

ಶ್ರೀಕಾಂತ – 9449337250

ವಾಟ್ಸ್ಯಾಪ್: 8183295646

ವಿಳಾಸ: ನೀನಾಸಮ್, ಹೆಗ್ಗೋಡು, ಸಾಗರ, ಕರ್ನಾಟಕ – 577 417

ಈಮೇಲ್: info@ninasam.org

ಹೆಚ್ಚಿನ ಅರ್ಜಿಗಳು ಬಂದಿರುವ ಕಾರಣ ನೋಂದಾವಣೆ ನಿಲ್ಲಿಸಲಾಗಿದೆ

NINASAM
KALEGALA SANGADA MATUKATE
(Conversation with the Arts) October 2026

Ninasam organizes ‘Kalegala Sangada Matukate’ (Conversation with the Arts), a different version of the Culture Course that has been annually held at Ninasam for the last several decades.

The five-day event, between the 1st and 5th of October 2026, will consist of presentations and discussions about texts of different kinds—literature, theatre, music, folklore etc. The day-program is for the registered participants and guests, and the evening theatre festival that includes Ninasam and Tirugata Plays along with invited performances will be open for the public.

Artists, scholars and writers from various parts of Karnataka and other states will be resource persons in this program. A limited number of participants will be admitted through application. Participants should attend all five days and there is no option of partial attendance.

The registered participants will be provided accommodation (a shared, dormitory type) at Ninasam and the adjacent college campuses. Participants will have to pay a fixed fee that will take care of their food, accommodation and entrance tickets for the Theatre Festival.

NINASAM
KALEGALA SANGADA MATUKATE
(Conversation with the Arts) October 2026

Ninasam organizes ‘Kalegala Sangada Matukate’ (Conversation with the Arts), a different version of the Culture Course that has been annually held at Ninasam for the last several decades.

The five-day event, between the 1st and 5th of October 2026, will consist of presentations and discussions about texts of different kinds—literature, theatre, music, folklore etc. The day-program is for the registered participants and guests, and the evening theatre festival that includes Ninasam and Tirugata Plays along with invited performances will be open for the public.

Artists, scholars and writers from various parts of Karnataka and other states will be resource persons in this program. A limited number of participants will be admitted through application. Participants should attend all five days and there is no option of partial attendance.

The registered participants will be provided accommodation (a shared, dormitory type) at Ninasam and the adjacent college campuses. Participants will have to pay a fixed fee that will take care of their food, accommodation and entrance tickets for the Theatre Festival.

Guidelines for Registration:

  • Interested participants can register online for the event through the below given link.
  • Those who wish to register by sending an application through post, download the application given below. The filled application should reach us before 5 September 2026.
  • We will send more details regarding the fee payment, lodging, etc. during the second week of September through email or whatsapp to those who are selected.
  • Participants shall attend all the sessions over five days and there is no option of partial attendance.
  • The fees to be paid, for breakfast, lunch, snack and dinner along with the entrance tickets for the evening programmes and accommodation, is Rs. 7,000 (Rs. Seven Thousand) inclusive of GST. For college students with a letter from their institution the reduced fee is Rs.4,500 (Rs. Four Thousand Five Hundred) inclusive of GST.

Tentative Schedule of the Programmes

Day Programmes (only for registered participants)

Inaugural Arindam Chakravarthy, Sundar Sarukkai, Gopal Guru; Discussion of the plays watched; Shakuntaleya Gurutu play (Dir. by Akshara K.V.) presentation; On the play Abhijnana Shakuntalam – Arindam Chakravarthy, Sriram Bhat; Thayambaka, A presentation of Chande rythms, by Rahita Krishnadas & group, Kerala; A conversation on present Kannada literature & Culture, Vivek Shanbhag, Guruprasad Kaginele; On Puppetry – Anurupa Roy; On Running Professional Theatre Companies – Jyoti Guledagudda, Sujata Gubbi, Prakash Garud; The Changing Grammar of Cinema – Girish Kasaravalli; Presenting Harmonium and Accordion – M.B. Prakash, Beene Ravi, Colonel Badi Vitthal, Pt. Ravindra Katoti; The book of my liking – M.S. Sriram, Geetha Vasanth, Sharath Ananthamurthy; On ways of Translation – Vanamala Vishwanath, Sundar Sarukkai; Shoorpanakha, One person theatre presentation by Parshathy J. Nath; and Valedictory session. The other guests who take part in the proceedings include: T.P. Ashoka, Jaswanth Jadhav, Atul Tiwari, Ganesh M., Manju Kodagu, Manju Kasaragodu, Madhava Chippali, BR Venkataramana Aithal.

Evening Programmes (from 7pm, open for public):

1 October: Ninasam play: Andhayuga, Dir by M. Ganesh, 2 October: Tirugata play: Paduka Kireeti, Dir by Manju Kodagu, 3 October: Tirugata play: Kola, Dir by Manju Kasaragodu, 4 October: Invited play: Sita Banbas, by Ank, Mumbai, Directed by Atul Tiwari, 5 October: Hindustani Music by Siddhartha Belmannu.
This workshop is intended primarily for cultural enthusiasts from rural and semi urban parts of Karnataka. But it is open to anyone who has a general interest in cultural activities. Many of the sessions and performances in the workshop will be in Kannada, and therefore, those who cannot understand Kannada will have a disadvantage.

For More Information (10:00 AM to 6:00 PM)

Srikanth – 9449337250

WhatsApp: 8183295646

Address: Ninasam, Heggodu, Sagara, Karnataka – 577417

Email: info@ninasam.org

Registration has been closed due to the receipt of a large number of applications